ಶ್ರೀ ವೈಭವ ಲಕ್ಷ್ಮಿ ಕ್ರಿಯೇಷನ್ಸ್ ಲಾಂಛನದಲ್ಲಿ ಬಿ.ಎಸ್. ವಿನೋದ್ ಕುಮಾರ್, ಗಿರೀಶ್, ವೀರೇಶ್ ನಾಗೇಂದ್ರ ಕೂಡಿ ನಿರ್ಮಿಸುತ್ತಿರುವ ಶಶಿವರ್ಮಾ ನಿರ್ದೇಶನದಅರ್ಧಸತ್ಯ ಚಿತ್ರಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಅಕ್ಷಯ್, ವಿಲನ್ ಗಳೊಂದಿಗೆ ಹೊಡೆದಾಡಿದ ದೃಶ್ಯ ಹಾಗೂ ಕೃಷ್ಣಕುಮಾರಿ ಎಸ್ಟೇಟ್ನಲ್ಲಿ ಕೆಲವು ಮತಿನ ಭಾಗದ ಚಿತ್ರಿಕರಣ ನಡೆಯಿತು. ಈ ಚಿತ್ರಕ್ಕೆ ಪ್ರಾಜೆಕ್ಟ್ ಡಿಸೈನರ್ ಬಿ. ರಾಮಾಮೂರ್ತಿ, ಛಾಯಾಗ್ರಹಣ ಜಗದೀಶ್, ಸಂಗೀತ ಬೋಲೆ, ಸಂಕಲನ ಆನಂದ್, ಸಂಭಾಷಣೆ ಕಮಲ್, ಸಾಹಸ ಎಸ್.ಎಸ್ ಸ್ಟಾಲಿನ್, ನೃತ್ಯ ವೆಂಕಟ್, ಸಹನಿರ್ದೇಶನ ಸೂರ್ಯಮಣಿ, ಶ್ರೀನಿವಾಸ್, ನಿರ್ವಹಣೆ, ರವಿಶಂಕರ್, ತಾರಾಗಣದಲ್ಲಿ ಅಕ್ಷಯ್, ಪಾವನಿ, ಪ್ರಿಯಾಂಕ, ವಿಜಯ್ ಜೆಟ್ಟಿ, ಟಾರ್ಜನ್, ಬ್ಯಾಂಕ್ ಜನಾರ್ಧನ್,ಪ್ರೇಮಲತಾ, ನವನೀತಾ, ಸುರೇಶ್ ಮಂಗಳೂರು, ಸುಧೀರ್, ಶಿಂಬು ಮುಂತಾದವರು ಅಭಿನಯಿಸುತ್ತಿದ್ದಾರೆ.